ಪುಟಗಳು

Friday, March 22, 2013



ಯಾವುದೋ ಆಲೋಚನೆಯಲ್ಲಿ ಏನೋ ಗೀಚಿದೆ..   ಪುನ: ಓದಿ ನೋಡಿದೆ,ಅರ್ಥವಾಗಲಿಲ್ಲ!ಅರ್ಥವಾಗದಿದ್ದರೆ ಹಾಗೆಯೇ ಓದಿ ಬಿಟ್ಟು ಬಿಡಿ…………..

ಸಾವಿರಾರು ಹೋರಾಟ ಸಾಯುವವರೆಗೆ
ಪ್ರತಿದಿನ ಪ್ರತಿಕ್ಷಣ ಪ್ರಾರ್ಥನೆ ಪರಮಾತ್ಮನಲ್ಲಿ,
ಸರ್ವ ಸುಖಕಾಗಿ…
ಖಳದಾರಿಯೋ ಸರಿದಾರಿಯೊ ಖುಷಿನೀಡುವುದೇ ರಹದಾರಿ..
 ನಯವಾದ ಹೆದ್ದಾರಿಯಿರಲು ಯಾವನಿಗೆ ಬೇಕು
ಕಲ್ಲು ಮಣ್ಣಿನ ,ಹೊ0ಡಗು0ಡಿಯ ಕಾಲುದಾರಿ..?
ಹೆದ್ದಾರಿಯ ಕೊನೆ ಎಲ್ಲರಿಗೂ ತಿಳಿದಿರುವುದು
ಕೊನೆಯಲ್ಲಿ ಕಾಲಿಡಲು ಸ್ಥಳವಿಲ್ಲದ ಜನಜ0ಗುಳಿ
ಕೊನೆ ಸೇರುವ ಮೊದಲು ಅಲ್ಲಲ್ಲಿ ಟ್ರಾಫಿಕ್ ಜಾಮ್ ಗಳು;
ಅರ್ಧದಾರಿಯಲ್ಲೇ ಹಾರಿ ಹೋಗುವ ಹಲವು ಪ್ರಾಣಪಕ್ಷಿಗಳು…

ಇನ್ನೆಲ್ಲೋ ದಾರಿ ತಪ್ಪಿದವರ0ತೆ ಹಿ0ತಿರುಗಿ ಬ0ದು
ಒಳದಾರಿಯಲಿ ಚಲಿಸುವವರು ಕೆಲವು….

ತಣ್ಣನೆ ಕಾಡೊಲಗೆ ಮರಗಳ ನೆರಳೊಳಗೆ
ಯಾರಿಗೂ ತಿಳಿಯದೆ ಪಯಣಿಸಿದವನು ಬಲ್ಲನು
ಹೆದ್ದಾರಿಯ ವೇಗಕ್ಕಿ0ತ ಕುಲುಕಿ ಬಳುಕಿ ಸಾಗಿದರೂ
ತನ್ನನ್ನೇ ತಾನರಿವ ಪ್ರಶಾ0ತ ಕೊನೆಯಿದೆಯೆ0ದು……