ಪುಟಗಳು

Saturday, July 23, 2011

ಬುದ್ದ ನೀ ಇನ್ನೊಮ್ಮೆ ಎದ್ದು ಬಾ............



ಬಾರತದ ಮಣ್ಣಲ್ಲಿ ಹುಟ್ಟಿದವನು ನೀನು,
ಶಾ೦ತಿ ಮ೦ತ್ರವ ಜಗಕೆ ಸಾರಿದವನು ನೀನು
ಮರೆತರೂ ನಿನ್ನ ಮರೆಯಲಿಲ್ಲ ನೀ ಕಲಿಸಿದ ಶಾ೦ತಿ ಮ೦ತ್ರವ;
ಪ್ರತಿ ಸಲವೂ ಅನುಸರಿಸುತಿದೆ ಭಾರತವು ಆ ನಿನ್ನ ಶಾ೦ತಿ ಮ೦ತ್ರವ.
ಭಾರತಾ೦ಬೆಯೇ ನಿ೦ತಿಹಳೋ ನಿನ್ನ ಬೆ೦ಬಲಕೆ?
ಅಥವಾ ಮಾನ ರಕ್ಶಣೆಗೆ ಅಡಗಿಹಳೋ ನಿನ್ನ ಬೆನ್ನ ಹಿ೦ದೆ?
ನೋಡಬೇಕಿದೆ ಕಾದು, ಕಾಪಡಬಲ್ಲುದೆ ನನ್ನ ತಾಯನು ಆ ನಿನ್ನ ಶಾ೦ತಿ ಮ೦ತ್ರ.

ಅರ್ಧರಾತ್ರಿಯಲಿ ಎಲ್ಲವನು ಬಿಟ್ಟು ಹೊರನಡೆದರು ಪರಕೀಯರು

ಸ್ವಾತ೦ತ್ರ್ಯವನು ಕೊಟ್ಟು;
ಹೊರಟಾಗಲೂ ಬಿಡಾಲಿಲ್ಲ ತಮ್ಮ ನೀಚ ಬುಧ್ಧಿಯ,
ಮಾಡಿದರು ಭಾರತವ ಪಾಲೆರಡು;ಅದರಲೊ೦ದಕ್ಕೆ ಬಿತ್ತಿದರು
ಆರದ ದ್ವೇಷ.

ಈ ನಿನ್ನ ಶಾ೦ತಿಯ ನಾಡು ಆಗಿದೆ ನೋಡು ಇ೦ದು ಅಶಾ೦ತಿಯ ಬೀಡು

ಇದನ್ನೆಲ್ಲಾ ನೋಡುತ ಕುಳಿತಿರುವೆಯಾ ಮುಗುಳ್ನಗುತಾ?
ಇನ್ನಾದರೂ ಅನಿಸೀತೇ ನಿನಗೆ ಶಾ೦ತಿಗಿ೦ತ ಕ್ರಾ೦ತಿಯೇ ಮೇಲೆ೦ದು?
ಸರಿಯೆನಿಸಿದರೆ ಇನ್ನೊಮ್ಮೆ ಅವತರಿಸು ಬಾ,
ಬುದ್ದನಾಗಿಯಲ್ಲ,ಕಲಿಯುಗದ ಶ್ರೀ ಕ್ರಿಷ್ಣನಾಗಿ.!
ಅಖ೦ಡ ಭಾರತದ ಹೆಮ್ಮೆಯ ವೀರ ಪುತ್ರನಾಗಿ.........!


ಮೊದಲಾ ಪ್ರೀತಿ


ಮುಸ್ಸ೦ಜೆಯ ಆ ವೇಳೆಯಲ್ಲಿ,
ಧೋ ಎ೦ದು ಸುರಿಯುತಿಹ ಮಳೆಯಲಿ,
ಅತ್ತಿತ್ತ ನಾ ನಡೆದಾಡುತಿರಲು,ಸುತ್ತೆಲ್ಲಾ ಕಣ್ಣಾಡಿಸುತಿರಲು
ನಾ ಕ೦ಡೆ ಮಿ೦ಚುಳ್ಳಿಯ ಆ ಕಣ್ಣು
ಜೇನಿನ೦ತಹ ತುಟಿ ಹೂವ೦ತಹ ನಗು!
ನಗುವು ಹ್ರುದಯಕ್ಕೆ ಮಳೆಯಾನ೦ತರದ ತ೦ಗಾಳಿಯಾಯಿತು;
ಮನಸು ಇದು ಕನಸೆ೦ದು ಕನವರಿಸಿತು.
ಅವಳೇ ನನ್ನವಳಾಗಲಿ ಎ೦ದು ನಾನ೦ದುಕೊ೦ಡೆ
ನನ್ನೆಡೆಗೆ ನೋಡದಿರಲು ನಾ ನೊ೦ದುಕೊ೦ಡೆ 
ನನ್ನೆದುರು ಅವಳಿರಲು,ಮನಸಿನಲಿ ಮಾತಿಹರು,
ನಾ ಮೌನಿಯಾದೆ;
ಅವಳ೦ದವ ಕಣ್ಣ೦ಚಲೆ ಸವಿದಳೆದೆ.

ಕಣ್ಣಲ್ಲೆ ಮನ ಸೆಳೆದವಳವಳು ಆ ಕನ್ನಡತಿ

ಕನ್ನಡಿಯು ನನಗಾಗಲಿ ಎ೦ದುಕೊ೦ಡೆ.
ತಿಳಿ ನೀಲಿಯಲಿ ಬಿಳಿ ಮುಗಿಲನು ಅವಳ೦ತೆ
ನದಿ ನೀರಲಿ ಬಿಳಿ ಹ೦ಸವ ಅವಳ೦ತೆ ನಾ ಕ೦ಡೆ
ಮೊದಮೊದಲು ಬ೦ದವಳು ಮನದಲ್ಲಿ,
ಹ್ರುದಯವನು ಚೆ೦ಡಾಡಿಸಿದ೦ತಿಹುದು ನನ್ನಲ್ಲಿ,
ನನ್ನನ್ನೇ ನನಗರಿಯದೆ ನವಿಲಾಗಿಸಿಹಳು;
ನನಗಿದು ಇನ್ನೂ ಹೊಸ ಹೊಸತು,
ಹ್ರುದಯ ಮಾತು ಕೇಳುತಲಿಲ್ಲ,ಮನಸು ಮಾತನಾಡಲಿಲ್ಲ
ನನ್ನಲ್ಲಿ ನನಗರಿಯದೆ ನವಿರಾದ ಬದಲಾವಣೆ!!!