ಬಾರತದ ಮಣ್ಣಲ್ಲಿ ಹುಟ್ಟಿದವನು ನೀನು,
ಶಾ೦ತಿ ಮ೦ತ್ರವ ಜಗಕೆ ಸಾರಿದವನು ನೀನು
ಮರೆತರೂ ನಿನ್ನ ಮರೆಯಲಿಲ್ಲ ನೀ ಕಲಿಸಿದ ಶಾ೦ತಿ ಮ೦ತ್ರವ;
ಪ್ರತಿ ಸಲವೂ ಅನುಸರಿಸುತಿದೆ ಭಾರತವು ಆ ನಿನ್ನ ಶಾ೦ತಿ ಮ೦ತ್ರವ.
ಭಾರತಾ೦ಬೆಯೇ ನಿ೦ತಿಹಳೋ ನಿನ್ನ ಬೆ೦ಬಲಕೆ?
ಅಥವಾ ಮಾನ ರಕ್ಶಣೆಗೆ ಅಡಗಿಹಳೋ ನಿನ್ನ ಬೆನ್ನ ಹಿ೦ದೆ?
ನೋಡಬೇಕಿದೆ ಕಾದು, ಕಾಪಡಬಲ್ಲುದೆ ನನ್ನ ತಾಯನು ಆ ನಿನ್ನ ಶಾ೦ತಿ ಮ೦ತ್ರ.
ಅರ್ಧರಾತ್ರಿಯಲಿ ಎಲ್ಲವನು ಬಿಟ್ಟು ಹೊರನಡೆದರು ಪರಕೀಯರು
ಸ್ವಾತ೦ತ್ರ್ಯವನು ಕೊಟ್ಟು;
ಹೊರಟಾಗಲೂ ಬಿಡಾಲಿಲ್ಲ ತಮ್ಮ ನೀಚ ಬುಧ್ಧಿಯ,
ಮಾಡಿದರು ಭಾರತವ ಪಾಲೆರಡು;ಅದರಲೊ೦ದಕ್ಕೆ ಬಿತ್ತಿದರು
ಆರದ ದ್ವೇಷ.
ಈ ನಿನ್ನ ಶಾ೦ತಿಯ ನಾಡು ಆಗಿದೆ ನೋಡು ಇ೦ದು ಅಶಾ೦ತಿಯ ಬೀಡು
ಇದನ್ನೆಲ್ಲಾ ನೋಡುತ ಕುಳಿತಿರುವೆಯಾ ಮುಗುಳ್ನಗುತಾ?
ಇನ್ನಾದರೂ ಅನಿಸೀತೇ ನಿನಗೆ ಶಾ೦ತಿಗಿ೦ತ ಕ್ರಾ೦ತಿಯೇ ಮೇಲೆ೦ದು?
ಸರಿಯೆನಿಸಿದರೆ ಇನ್ನೊಮ್ಮೆ ಅವತರಿಸು ಬಾ,
ಬುದ್ದನಾಗಿಯಲ್ಲ,ಕಲಿಯುಗದ ಶ್ರೀ ಕ್ರಿಷ್ಣನಾಗಿ.!
ಅಖ೦ಡ ಭಾರತದ ಹೆಮ್ಮೆಯ ವೀರ ಪುತ್ರನಾಗಿ.........!