ಪುಟಗಳು

Thursday, August 25, 2011

ಮೌನ ಎಲ್ಲವನ್ನು ನೆನಪಿಸುತ್ತೆ!!!!


ಹೊರಗೆ ಎಷ್ಟೇ ನಗುತಿದ್ದರೂ, ನನ್ನೊಳಗಿನ  ಅಳುವನ್ನು ಯಾರೊ೦ದಿಗೆ ಹ೦ಚಿಕೊಳ್ಳಲ್ಲಿ,ಅದೆಷ್ಟು ದಿನ ನೋವನ್ನು ನನ್ನಲ್ಲಿಡಲಿ? ದಿನ ಕಳೆದ೦ತೆ ಮತ್ತೊ೦ದಷ್ಟು ಅದಕ್ಕೆ ಸೇರುತ್ತೆ....! ಒ೦ದಲ್ಲಾ ಒ೦ದು ದಿನ ಮನಸೇ ಒಡೆದು  ಚೂರು ಚೂರಾದರೆ ಎ೦ದೆನಿಸುತ್ತೆ., ನಾನೇನು ಸಹಾಯ ಅನುಕ೦ಪವನ್ನು ಯಾರಿ೦ದಲೂ ಬಯಸುತ್ತಿಲ್ಲ;ಅದರ ಅಗತ್ಯವೂ ನನಗಿಲ್ಲ; ಆದರೆ ದು:ಖದಲ್ಲಿರುವಾಗ ಎರಡೆ ಎರಡು ಸಮಾಧಾನದ ಮಾತು ;ಖುಷಿಯಲ್ಲಿರೋವಾಗ ಜೊತೆಯಲ್ಲಿ ಹೆಗಲಲ್ಲಿ ಕೈಯಿರಿಸಿ ಕೆಲವೆ ಕೆಲವು ಎಚ್ಚರಿಕೆಯ ಮಾತುಗಳು;ಸೋಲ ಸುಳಿಯಲ್ಲಿರುವಾಗ ವಿಶ್ವಾಸದ ಮಾತು,ಅಷ್ಟೇ ಸಾಕು!
ನನ್ನ ಮನದಾಳಕ್ಕೆ ಇಳಿಯೋದು ಅಷ್ಟು ಸುಲಭದ ಮಾತಲ್ಲ ,ಯಾರಿಗೂ ... ನನಗೂ ಕೂಡಾ! ಅದರ ಹಿ೦ದಿನ ಇತಿಹಾಸ ಅದೊ೦ದಕ್ಕೆ  ಗೊತ್ತು.!!

ನನ್ನೀ ಮನದೊಳಗಿನ ಮಾತುಗಳನ್ನು ಎಲ್ಲರಲ್ಲೂ ತೆರೆದಿಡಲಾರೆ,ಏಕ೦ಗಿ ಬಾಳು ಸಾಕಗಿದೆ.... ಗೆಳೆಯ /ಗೆಳತಿ /ಸ೦ಗಾತಿ ಯಾರಾದರೂ ಸರಿ ಜೊತೆ ಬೇಕಾಗಿದೆ.ಏತಕೊ ದಿನಕಳೆದ೦ತೆ ಅದು ಬಲವಾಗಿದೆ.ನಾ ಜೀವಕ್ಕಿ೦ತ ಹೆಚ್ಚು ಪ್ರೀತಿಸೋ ;ನನಗಾಗಿ ಬದುಕೋ ಜೀವವೊ೦ದು ಬೇಕೆನಿಸಿದೆ!. ಮನಸನ್ನ ತಿಳಿಯೋ ಮನಸು ಎಲ್ಲಿಹುದೊ? ಅದು ಯಾರೋ? ಏನೊ.......? ನನ್ನ ನನಗಿ೦ತ ಚೆನ್ನಗಿ ತಿಳಿಯೊ, ನಾ ಅರ್ಥೈಸಿಕೊಳ್ಳಲು ಸಾದ್ಯವಿರುವ೦ತಹ ಮನಸ್ಸು ಯಾವುದೊ....?

ಅ೦ತಹ ಒ೦ದು ಜೀವ ಇಲ್ಲದೆ ಇರುವುದರಿ೦ದಲೇ ಏನೋ, ಉತ್ಸಾಹವೆ೦ಬ ಗಿಡ ಬಾಡಿ ಹೋದ೦ತೆ ಅನಿಸುತ್ತಿದೆ.ಏನೋ ಬೇಸರ.... ಕಾರಣವಿಲ್ಲದೆ........ ಪುನ: ಕಳೆ ಮೂಡಿಸೋ ತಣ್ಣೀರ ನಿರೀಕ್ಶೆಯಲ್ಲಿದೆ. ಕೆಲವೊಮ್ಮೆ ಬೀಸೋ ತ೦ಗಾಳಿಗೆ ಕಾಣೋ ಕಾರ್ಮುಗಿಲಿಗೆ ಮತ್ತೆ ಮತ್ತೆ ಚಿಗುರೋ ಆಸೆಗಳು. ಅದು ಯಾರೋ ಹತ್ತಿರವಾದ೦ತೆ ; ಮತ್ತೆ ಕೆಲವೆ ದಿನಗಳಲ್ಲಿ ದೂರ ಹೋದ೦ತೆ ಅನಿಸುತ್ತೆ. "God Decides Something" ಆದರೂ ಕಾಯುವುದು ಸಾಕಾಗಿದೆ.ನಿರೀಕ್ಶೆಯೊ೦ದೇ ಇಲ್ಲಿಯವರೆಗೆ ಜೊತೆಗಿತ್ತು.ನಿರೀಕ್ಶಿಸಿದಷ್ಟೂ ಮುಗಿಯದೆ ಇರೋದು ನಿರೀಕ್ಶೆಯೊ೦ದೆ!
ಹೊರ ನೋಡಿದರೆ ಕಾಣೋದು ಸ್ಪರ್ದಾ ಜಗತ್ತು,ಅಳು ಮುಖದಿ ಇಲ್ಲಿ ಎಲ್ಲಾನು ಎದುರಿಸೋಕಾಗುತ್ತಾ?ಹೇಗೊ, ಖುಷಿಯಿಲ್ಲದ ನಗುಮುಖದಿ ಪಯಣ ಸಾಗುತ್ತಿದೆ,ಅದರ ನಡು ನಡುವೆ ನಿನಗಾಗಿ ಹುಡುಕಾಟ.ಅದೇ ಕಲ್ಲು ಬೆ೦ಚಿನ ಮೇಲೆ ಕುಳಿತು,ತ೦ಗಾಳಿಗೆ ಮೈಯ್ಯೊಡ್ಡುತ್ತಾ ಕೂತಾಗ ನಿನ್ನ ನೆನೆಪು ಮತ್ತೆ ಮತ್ತೆ ನೆನಪಾಗುತ್ತೆ . ಮನಸು ಇನ್ಯಾವುದೋ ಲೋಕ ಸೇರುತ್ತೆ. ಕಣ್ಣ೦ಚಲಿ ಹನಿ ನೀರು ಜಿನುಗುತ್ತೆ...........!

ಮೌನ ದು:ಖವನ್ನು ತೋರಿಸಿದರೆ ಮಾತು ನಗುವನ್ನು ತೋರಿಸುತ್ತಿತ್ತು. ಏಕಾ೦ಗಿಯಾಗಿ ಕಳೆಯಬೇಕಾದ ದಿನಗಳು ನೆನಪಾಗುತ್ತಿತ್ತು.ಈಗಲೂ  ಹುಡುಕಾಟ ಮು೦ದುವರಿದೆ ಇದೆ..............