ಬಾರತದ ಮಣ್ಣಲ್ಲಿ ಹುಟ್ಟಿದವನು ನೀನು,
ಶಾ೦ತಿ ಮ೦ತ್ರವ ಜಗಕೆ ಸಾರಿದವನು ನೀನು
ಮರೆತರೂ ನಿನ್ನ ಮರೆಯಲಿಲ್ಲ ನೀ ಕಲಿಸಿದ ಶಾ೦ತಿ ಮ೦ತ್ರವ;
ಪ್ರತಿ ಸಲವೂ ಅನುಸರಿಸುತಿದೆ ಭಾರತವು ಆ ನಿನ್ನ ಶಾ೦ತಿ ಮ೦ತ್ರವ.
ಭಾರತಾ೦ಬೆಯೇ ನಿ೦ತಿಹಳೋ ನಿನ್ನ ಬೆ೦ಬಲಕೆ?
ಅಥವಾ ಮಾನ ರಕ್ಶಣೆಗೆ ಅಡಗಿಹಳೋ ನಿನ್ನ ಬೆನ್ನ ಹಿ೦ದೆ?
ನೋಡಬೇಕಿದೆ ಕಾದು, ಕಾಪಡಬಲ್ಲುದೆ ನನ್ನ ತಾಯನು ಆ ನಿನ್ನ ಶಾ೦ತಿ ಮ೦ತ್ರ.
ಅರ್ಧರಾತ್ರಿಯಲಿ ಎಲ್ಲವನು ಬಿಟ್ಟು ಹೊರನಡೆದರು ಪರಕೀಯರು
ಸ್ವಾತ೦ತ್ರ್ಯವನು ಕೊಟ್ಟು;
ಹೊರಟಾಗಲೂ ಬಿಡಾಲಿಲ್ಲ ತಮ್ಮ ನೀಚ ಬುಧ್ಧಿಯ,
ಮಾಡಿದರು ಭಾರತವ ಪಾಲೆರಡು;ಅದರಲೊ೦ದಕ್ಕೆ ಬಿತ್ತಿದರು
ಆರದ ದ್ವೇಷ.
ಈ ನಿನ್ನ ಶಾ೦ತಿಯ ನಾಡು ಆಗಿದೆ ನೋಡು ಇ೦ದು ಅಶಾ೦ತಿಯ ಬೀಡು
ಇದನ್ನೆಲ್ಲಾ ನೋಡುತ ಕುಳಿತಿರುವೆಯಾ ಮುಗುಳ್ನಗುತಾ?
ಇನ್ನಾದರೂ ಅನಿಸೀತೇ ನಿನಗೆ ಶಾ೦ತಿಗಿ೦ತ ಕ್ರಾ೦ತಿಯೇ ಮೇಲೆ೦ದು?
ಸರಿಯೆನಿಸಿದರೆ ಇನ್ನೊಮ್ಮೆ ಅವತರಿಸು ಬಾ,
ಬುದ್ದನಾಗಿಯಲ್ಲ,ಕಲಿಯುಗದ ಶ್ರೀ ಕ್ರಿಷ್ಣನಾಗಿ.!
ಅಖ೦ಡ ಭಾರತದ ಹೆಮ್ಮೆಯ ವೀರ ಪುತ್ರನಾಗಿ.........!
No comments:
Post a Comment