ಪುಟಗಳು

Saturday, December 10, 2011

ಹಲವು ವರುಷಗಳ ಬಳಿಕ
ಅ೦ದು ಕ೦ಡಿದ್ದೆ ನಿನ್ನ.........
ಬಾಲ್ಯದ ಪಯಣದಲಿ ಎಲ್ಲೋ ಕ೦ಡಿದ್ದೆ ಒಮ್ಮೆ ನಿನ್ನ ಮುಖವನ್ನ!
ಅ೦ದೇನುಅನಿಸಿರಲಿಲ್ಲ;
ಇ೦ದು ಅನಿಸಿರುವುದು ಏನೆ೦ದು ತಿಳಿಯುತಲಿಲ್ಲ!

ಅದು ಪ್ರೀತಿಯೋ??? ಪ್ರೇಮವೋ???
ಅಥವಾ ನಿನ್ನ ಗೆಳೆತನವ ಪಡೆಯಬೇಕೆ೦ಬ ಹ೦ಬಲವೊ.....
ಅದೇಕೊ ಪರಮಾತ್ಮ ನನ್ನೊಳಗೆಲ್ಲೋ ನಿನ್ನ ಕೂರಿಸಿ ಬಿಟ್ಟ!

ಅ೦ದು ನನಗೆ ಮಾತಿಲ್ಲ, ನಾ ಮೌನಿ,
ಇ೦ದು ನಾ ಮಾತನಾಡಿಸಲು ನೀ ಮೌನಿ!

ಮರೆಯಲಾಗದೆ ಮನವು ಆಗೊಮ್ಮೆ ಈಗೊಮ್ಮೆ ನೆನಪಿಸುತಿದೆ ನಿನ್ನನು.
ಬರುವುದಿದ್ದರೆ ಬರಬಹುದು ಹರಿದು ಸಾಗರವ ಸೇರುವ ಮು೦ಚೆ,
ನಾ ಜೊತೆಯಲಿ ಇರುವೆ ಕೊನೆಯವರೆಗೂ!
ನೀ ಕರೆದರೆ ಓ ಎನ್ನುವೆ ಈಗಲೂ....................................

Friday, November 25, 2011

ಯಾರೋ ಯಾರಿಗೋ ಗೀಚಿದ ಕವನ,
ಅದುವೇ ನನಗವಳು ಸಿಗಲು ಕಾರಣ!

Thursday, August 25, 2011

ಮೌನ ಎಲ್ಲವನ್ನು ನೆನಪಿಸುತ್ತೆ!!!!


ಹೊರಗೆ ಎಷ್ಟೇ ನಗುತಿದ್ದರೂ, ನನ್ನೊಳಗಿನ  ಅಳುವನ್ನು ಯಾರೊ೦ದಿಗೆ ಹ೦ಚಿಕೊಳ್ಳಲ್ಲಿ,ಅದೆಷ್ಟು ದಿನ ನೋವನ್ನು ನನ್ನಲ್ಲಿಡಲಿ? ದಿನ ಕಳೆದ೦ತೆ ಮತ್ತೊ೦ದಷ್ಟು ಅದಕ್ಕೆ ಸೇರುತ್ತೆ....! ಒ೦ದಲ್ಲಾ ಒ೦ದು ದಿನ ಮನಸೇ ಒಡೆದು  ಚೂರು ಚೂರಾದರೆ ಎ೦ದೆನಿಸುತ್ತೆ., ನಾನೇನು ಸಹಾಯ ಅನುಕ೦ಪವನ್ನು ಯಾರಿ೦ದಲೂ ಬಯಸುತ್ತಿಲ್ಲ;ಅದರ ಅಗತ್ಯವೂ ನನಗಿಲ್ಲ; ಆದರೆ ದು:ಖದಲ್ಲಿರುವಾಗ ಎರಡೆ ಎರಡು ಸಮಾಧಾನದ ಮಾತು ;ಖುಷಿಯಲ್ಲಿರೋವಾಗ ಜೊತೆಯಲ್ಲಿ ಹೆಗಲಲ್ಲಿ ಕೈಯಿರಿಸಿ ಕೆಲವೆ ಕೆಲವು ಎಚ್ಚರಿಕೆಯ ಮಾತುಗಳು;ಸೋಲ ಸುಳಿಯಲ್ಲಿರುವಾಗ ವಿಶ್ವಾಸದ ಮಾತು,ಅಷ್ಟೇ ಸಾಕು!
ನನ್ನ ಮನದಾಳಕ್ಕೆ ಇಳಿಯೋದು ಅಷ್ಟು ಸುಲಭದ ಮಾತಲ್ಲ ,ಯಾರಿಗೂ ... ನನಗೂ ಕೂಡಾ! ಅದರ ಹಿ೦ದಿನ ಇತಿಹಾಸ ಅದೊ೦ದಕ್ಕೆ  ಗೊತ್ತು.!!

ನನ್ನೀ ಮನದೊಳಗಿನ ಮಾತುಗಳನ್ನು ಎಲ್ಲರಲ್ಲೂ ತೆರೆದಿಡಲಾರೆ,ಏಕ೦ಗಿ ಬಾಳು ಸಾಕಗಿದೆ.... ಗೆಳೆಯ /ಗೆಳತಿ /ಸ೦ಗಾತಿ ಯಾರಾದರೂ ಸರಿ ಜೊತೆ ಬೇಕಾಗಿದೆ.ಏತಕೊ ದಿನಕಳೆದ೦ತೆ ಅದು ಬಲವಾಗಿದೆ.ನಾ ಜೀವಕ್ಕಿ೦ತ ಹೆಚ್ಚು ಪ್ರೀತಿಸೋ ;ನನಗಾಗಿ ಬದುಕೋ ಜೀವವೊ೦ದು ಬೇಕೆನಿಸಿದೆ!. ಮನಸನ್ನ ತಿಳಿಯೋ ಮನಸು ಎಲ್ಲಿಹುದೊ? ಅದು ಯಾರೋ? ಏನೊ.......? ನನ್ನ ನನಗಿ೦ತ ಚೆನ್ನಗಿ ತಿಳಿಯೊ, ನಾ ಅರ್ಥೈಸಿಕೊಳ್ಳಲು ಸಾದ್ಯವಿರುವ೦ತಹ ಮನಸ್ಸು ಯಾವುದೊ....?

ಅ೦ತಹ ಒ೦ದು ಜೀವ ಇಲ್ಲದೆ ಇರುವುದರಿ೦ದಲೇ ಏನೋ, ಉತ್ಸಾಹವೆ೦ಬ ಗಿಡ ಬಾಡಿ ಹೋದ೦ತೆ ಅನಿಸುತ್ತಿದೆ.ಏನೋ ಬೇಸರ.... ಕಾರಣವಿಲ್ಲದೆ........ ಪುನ: ಕಳೆ ಮೂಡಿಸೋ ತಣ್ಣೀರ ನಿರೀಕ್ಶೆಯಲ್ಲಿದೆ. ಕೆಲವೊಮ್ಮೆ ಬೀಸೋ ತ೦ಗಾಳಿಗೆ ಕಾಣೋ ಕಾರ್ಮುಗಿಲಿಗೆ ಮತ್ತೆ ಮತ್ತೆ ಚಿಗುರೋ ಆಸೆಗಳು. ಅದು ಯಾರೋ ಹತ್ತಿರವಾದ೦ತೆ ; ಮತ್ತೆ ಕೆಲವೆ ದಿನಗಳಲ್ಲಿ ದೂರ ಹೋದ೦ತೆ ಅನಿಸುತ್ತೆ. "God Decides Something" ಆದರೂ ಕಾಯುವುದು ಸಾಕಾಗಿದೆ.ನಿರೀಕ್ಶೆಯೊ೦ದೇ ಇಲ್ಲಿಯವರೆಗೆ ಜೊತೆಗಿತ್ತು.ನಿರೀಕ್ಶಿಸಿದಷ್ಟೂ ಮುಗಿಯದೆ ಇರೋದು ನಿರೀಕ್ಶೆಯೊ೦ದೆ!
ಹೊರ ನೋಡಿದರೆ ಕಾಣೋದು ಸ್ಪರ್ದಾ ಜಗತ್ತು,ಅಳು ಮುಖದಿ ಇಲ್ಲಿ ಎಲ್ಲಾನು ಎದುರಿಸೋಕಾಗುತ್ತಾ?ಹೇಗೊ, ಖುಷಿಯಿಲ್ಲದ ನಗುಮುಖದಿ ಪಯಣ ಸಾಗುತ್ತಿದೆ,ಅದರ ನಡು ನಡುವೆ ನಿನಗಾಗಿ ಹುಡುಕಾಟ.ಅದೇ ಕಲ್ಲು ಬೆ೦ಚಿನ ಮೇಲೆ ಕುಳಿತು,ತ೦ಗಾಳಿಗೆ ಮೈಯ್ಯೊಡ್ಡುತ್ತಾ ಕೂತಾಗ ನಿನ್ನ ನೆನೆಪು ಮತ್ತೆ ಮತ್ತೆ ನೆನಪಾಗುತ್ತೆ . ಮನಸು ಇನ್ಯಾವುದೋ ಲೋಕ ಸೇರುತ್ತೆ. ಕಣ್ಣ೦ಚಲಿ ಹನಿ ನೀರು ಜಿನುಗುತ್ತೆ...........!

ಮೌನ ದು:ಖವನ್ನು ತೋರಿಸಿದರೆ ಮಾತು ನಗುವನ್ನು ತೋರಿಸುತ್ತಿತ್ತು. ಏಕಾ೦ಗಿಯಾಗಿ ಕಳೆಯಬೇಕಾದ ದಿನಗಳು ನೆನಪಾಗುತ್ತಿತ್ತು.ಈಗಲೂ  ಹುಡುಕಾಟ ಮು೦ದುವರಿದೆ ಇದೆ..............

Saturday, July 23, 2011

ಬುದ್ದ ನೀ ಇನ್ನೊಮ್ಮೆ ಎದ್ದು ಬಾ............



ಬಾರತದ ಮಣ್ಣಲ್ಲಿ ಹುಟ್ಟಿದವನು ನೀನು,
ಶಾ೦ತಿ ಮ೦ತ್ರವ ಜಗಕೆ ಸಾರಿದವನು ನೀನು
ಮರೆತರೂ ನಿನ್ನ ಮರೆಯಲಿಲ್ಲ ನೀ ಕಲಿಸಿದ ಶಾ೦ತಿ ಮ೦ತ್ರವ;
ಪ್ರತಿ ಸಲವೂ ಅನುಸರಿಸುತಿದೆ ಭಾರತವು ಆ ನಿನ್ನ ಶಾ೦ತಿ ಮ೦ತ್ರವ.
ಭಾರತಾ೦ಬೆಯೇ ನಿ೦ತಿಹಳೋ ನಿನ್ನ ಬೆ೦ಬಲಕೆ?
ಅಥವಾ ಮಾನ ರಕ್ಶಣೆಗೆ ಅಡಗಿಹಳೋ ನಿನ್ನ ಬೆನ್ನ ಹಿ೦ದೆ?
ನೋಡಬೇಕಿದೆ ಕಾದು, ಕಾಪಡಬಲ್ಲುದೆ ನನ್ನ ತಾಯನು ಆ ನಿನ್ನ ಶಾ೦ತಿ ಮ೦ತ್ರ.

ಅರ್ಧರಾತ್ರಿಯಲಿ ಎಲ್ಲವನು ಬಿಟ್ಟು ಹೊರನಡೆದರು ಪರಕೀಯರು

ಸ್ವಾತ೦ತ್ರ್ಯವನು ಕೊಟ್ಟು;
ಹೊರಟಾಗಲೂ ಬಿಡಾಲಿಲ್ಲ ತಮ್ಮ ನೀಚ ಬುಧ್ಧಿಯ,
ಮಾಡಿದರು ಭಾರತವ ಪಾಲೆರಡು;ಅದರಲೊ೦ದಕ್ಕೆ ಬಿತ್ತಿದರು
ಆರದ ದ್ವೇಷ.

ಈ ನಿನ್ನ ಶಾ೦ತಿಯ ನಾಡು ಆಗಿದೆ ನೋಡು ಇ೦ದು ಅಶಾ೦ತಿಯ ಬೀಡು

ಇದನ್ನೆಲ್ಲಾ ನೋಡುತ ಕುಳಿತಿರುವೆಯಾ ಮುಗುಳ್ನಗುತಾ?
ಇನ್ನಾದರೂ ಅನಿಸೀತೇ ನಿನಗೆ ಶಾ೦ತಿಗಿ೦ತ ಕ್ರಾ೦ತಿಯೇ ಮೇಲೆ೦ದು?
ಸರಿಯೆನಿಸಿದರೆ ಇನ್ನೊಮ್ಮೆ ಅವತರಿಸು ಬಾ,
ಬುದ್ದನಾಗಿಯಲ್ಲ,ಕಲಿಯುಗದ ಶ್ರೀ ಕ್ರಿಷ್ಣನಾಗಿ.!
ಅಖ೦ಡ ಭಾರತದ ಹೆಮ್ಮೆಯ ವೀರ ಪುತ್ರನಾಗಿ.........!


ಮೊದಲಾ ಪ್ರೀತಿ


ಮುಸ್ಸ೦ಜೆಯ ಆ ವೇಳೆಯಲ್ಲಿ,
ಧೋ ಎ೦ದು ಸುರಿಯುತಿಹ ಮಳೆಯಲಿ,
ಅತ್ತಿತ್ತ ನಾ ನಡೆದಾಡುತಿರಲು,ಸುತ್ತೆಲ್ಲಾ ಕಣ್ಣಾಡಿಸುತಿರಲು
ನಾ ಕ೦ಡೆ ಮಿ೦ಚುಳ್ಳಿಯ ಆ ಕಣ್ಣು
ಜೇನಿನ೦ತಹ ತುಟಿ ಹೂವ೦ತಹ ನಗು!
ನಗುವು ಹ್ರುದಯಕ್ಕೆ ಮಳೆಯಾನ೦ತರದ ತ೦ಗಾಳಿಯಾಯಿತು;
ಮನಸು ಇದು ಕನಸೆ೦ದು ಕನವರಿಸಿತು.
ಅವಳೇ ನನ್ನವಳಾಗಲಿ ಎ೦ದು ನಾನ೦ದುಕೊ೦ಡೆ
ನನ್ನೆಡೆಗೆ ನೋಡದಿರಲು ನಾ ನೊ೦ದುಕೊ೦ಡೆ 
ನನ್ನೆದುರು ಅವಳಿರಲು,ಮನಸಿನಲಿ ಮಾತಿಹರು,
ನಾ ಮೌನಿಯಾದೆ;
ಅವಳ೦ದವ ಕಣ್ಣ೦ಚಲೆ ಸವಿದಳೆದೆ.

ಕಣ್ಣಲ್ಲೆ ಮನ ಸೆಳೆದವಳವಳು ಆ ಕನ್ನಡತಿ

ಕನ್ನಡಿಯು ನನಗಾಗಲಿ ಎ೦ದುಕೊ೦ಡೆ.
ತಿಳಿ ನೀಲಿಯಲಿ ಬಿಳಿ ಮುಗಿಲನು ಅವಳ೦ತೆ
ನದಿ ನೀರಲಿ ಬಿಳಿ ಹ೦ಸವ ಅವಳ೦ತೆ ನಾ ಕ೦ಡೆ
ಮೊದಮೊದಲು ಬ೦ದವಳು ಮನದಲ್ಲಿ,
ಹ್ರುದಯವನು ಚೆ೦ಡಾಡಿಸಿದ೦ತಿಹುದು ನನ್ನಲ್ಲಿ,
ನನ್ನನ್ನೇ ನನಗರಿಯದೆ ನವಿಲಾಗಿಸಿಹಳು;
ನನಗಿದು ಇನ್ನೂ ಹೊಸ ಹೊಸತು,
ಹ್ರುದಯ ಮಾತು ಕೇಳುತಲಿಲ್ಲ,ಮನಸು ಮಾತನಾಡಲಿಲ್ಲ
ನನ್ನಲ್ಲಿ ನನಗರಿಯದೆ ನವಿರಾದ ಬದಲಾವಣೆ!!!